round

ಟಿವಿ9
ನವನಕ್ಷತ್ರ ಸನ್ಮಾನ

ಉತ್ತಮ ಸಮಾಜಕ್ಕಾಗಿ ಎನ್ನುವ ಧ್ಯೇಯ ವಾಕ್ಯದೊಂದಿಗೆ ಕೆಲಸ ಆರಂಭಿಸಿದ ಟಿವಿ9 ಕನ್ನಡಕ್ಕೆ ಈಗ ಸಾರ್ಥಕ 15ರ ಸಂಭ್ರಮ. ಈ ಹದಿನೈದು ವರ್ಷಗಳಲ್ಲಿ ಕರ್ನಾಟಕದ ಮನೆ ಮನಗಳನ್ನು ಗೆದ್ದು ಎಲ್ಲರ ಹೃದಯದಲ್ಲಿ ಸ್ಥಾನ ಪಡೆದ ಟಿವಿ9 ಎಲೆಮರೆಯ ಕಾಯಿಯಂತಿರುವ ಅಸಾಮಾನ್ಯ ಸಾಧಕರನ್ನು ಹೊರ ಜಗತ್ತಿಗೆ ಪರಿಚಯಿಸುತ್ತ ಬಂದಿದೆ.

ಇದಕ್ಕೆ ಸಾಕ್ಷಿಯೇ ನವನಕ್ಷತ್ರ ಸನ್ಮಾನ ಕಾರ್ಯಕ್ರಮ. ಪ್ರತಿ ವರ್ಷದಂತೆ, ಈ ಬಾರಿ ಕೂಡ ಸಮಾಜದ ಒಂಬತ್ತು ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸೇವೆ ಸಲ್ಲಿಸಿರುವ ಸಾಧಕರನ್ನು ಗುರುತಿಸಿ, ಟಿವಿ9 ಅವರನ್ನು ಸನ್ಮಾನಿಸಿದೆ. ಆಯ್ದ ಕ್ಷೇತ್ರದ ಒಂಭತ್ತು ಸಾಧಕರನ್ನು ಗೌರವಿಸುವುದರ ಜೊತೆಗೆ ಒಬ್ಬರಿಗೆ ಜೀವಮಾನ ಶ್ರೇಷ್ಠ ಸಾಧನೆಗಾಗಿ ಗೌರವಿಸುವುದು ನವನಕ್ಷತ್ರ ಸನ್ಮಾನ ಕಾರ್ಯಕ್ರಮದ ಮುಖ್ಯ ಉದ್ದೇಶ.

ಜೀವಮಾನದ ಸಾಧನೆ

ಪುನೀತ್​ ರಾಜ್​ಕುಮಾರ್

ನಟನೆಯ ಮೂಲಕ ಯಾನವನ್ನು ಪ್ರಾರಂಭಿಸಿ ಸಮಾಜದ ಎಲ್ಲ ಸ್ತರದ ಜನರಿಗೆ ಸಹಾಯ ಮಾಡುತ್ತ, ಕೊಡುಗೈ ದಾನಿಯಾಗಿ ಬೆಳೆದ ಪುನೀತ್ ರಾಜ್​ಕುಮಾರ್​ ಇಂದು ನಮ್ಮ ನಡುವೆ ಇಲ್ಲ. ಅಚಾನಕ್ ಆಗಿ ತಮ್ಮ ಪಯಣವನ್ನು ನಿಲ್ಲಿಸಿ ನಡೆದ ಪುನೀತ್ ಅವರ ಸಿನಿ ಪಯಣ ಮತ್ತು ಜೀವಯಾನ ಲಕ್ಷಾಂತರ ಜನರಿಗೆ ಇವತ್ತು ಮಾದರಿಯಾಗಿದೆ. ಪುನೀತ್ ಅವರ ಪಾಸಿಟಿವ್ ಇನ್ಫ್ಲ್ಯೂಯೆನ್ಸ್ ಎಷ್ಟಿದೆ ಎಂದರೆ ಸಾವಿರಾರು ಜನ ನೇತ್ರದಾನಕ್ಕೆ ಮುಂದಾಗಿದ್ದಾರೆ.

ಇಂತಹ ಅದೆಷ್ಟೋ ಬೆಳವಣಿಗೆಗಳನ್ನು ನಾವು ಹೇಳಬಹುದು. ತಮ್ಮ ನಟನೆಗಾಗಿ ಹಲವಾರು ಪ್ರಶಸ್ತಿ ಗೆದ್ದಿರುವ ಪುನೀತ್​ ಅವರಿಗೆ, ಕರ್ನಾಟಕ ಸರ್ಕಾರ ನೀಡುವ ಸರ್ವೋನ್ನತ ನಾಗರಿಕ ಪ್ರಶಸ್ತಿ, ‘ಕರ್ನಾಟಕ ರತ್ನ’ ವನ್ನು ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಟಿವಿ9 ನೀಡುತ್ತ ಬಂದಿರುವ ‘ಜೀವಮಾನದ ಸಾಧನೆ’ ಸನ್ಮಾನಕ್ಕೆ ಈಗ ಪುನೀತ್ ರಾಜ್​ಕುಮಾರ್​ ಪಾತ್ರರಾಗಿದ್ದಾರೆ.

winner
honor logo

ಸನ್ಮಾನಿತರು

ಮುಖ್ಯ ಅತಿಥಿಗಳು

dot

ನವನಕ್ಷತ್ರ

ಸುದ್ದಿ

ನವನಕ್ಷತ್ರ

2019 ಮೆಲುಕು

ಇನ್ನೂ ಓದಿ

ನಮ್ಮನ್ನು ಸಂಪರ್ಕಿಸಿ